
ಕೋವಿಡ್ ರೂಪಾಂತರ ವಿದೇಶದಲ್ಲೇ ನಡೆಯುತ್ತೆ ಎನ್ನಲಾಗದು. ಭಾರತದಲ್ಲೂ ಇಂತಹ ಬದಲಾವಣೆ ಅಲ್ಲಗಳೆಯುವಂತಿಲ್ಲ. ವಿದೇಶಿ ಪ್ರಯಾಣಿಕರಿಗೆ ಕ್ವಾರೆಂಟೈನ್, ಆರ್ಟಿ ಪಿಸಿಆರ್ ಎನ್ನುತ್ತಿದೆ. ಆದರೆ ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ನಡೆಯುತ್ತಿಲ್ಲ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸರಕಾರದ ನಡುವಿನ ಸಮನ್ವಯ ಕೊರತೆ ಜನರ ಮೇಲೆ ಪರಿಣಾಮ ಬೀರುತ್ತಿದೆ. ನೈಟ್ ಕರ್ಫ್ಯೂ ಬಗ್ಗೆ ಸರಕಾರಕ್ಕೆ ವೈಜ್ಞಾನಿಕ ತಿಳುವಳಿಕೆ ಇಲ್ಲ ಎಂದು ಹೇಳಿದರು. ಇನ್ನು ರಾಜ್ಯ ಸರ್ಕಾರಕ್ಕೆ ಶಾಲಾ ಆರಂಭದ ಬಗ್ಗೆಯೂ ಗೊಂದಲವಿದೆ. ಸರಕಾರ ಈ ಬಗ್ಗೆ ಸ್ಪಷ್ಟ ನಿರ್ಧಾರ ಹೊಂದಬೇಕಿದೆ. ಆಫ್ಲೈನ್, ಆನ್ಲೈನ್ ಎರಡು ಆಯ್ಕೆಯ ಅವಕಾಶ ಅಸಮಂಜಸ. ಆಫ್ ಲೈನ್ ಶುರುವಾದ ಬಳಿಕ ಆನ್ ಲೈನ್ ಸೂಕ್ತವೇ? ಎಂದು ಶಾಸಕ ಖಾದರ್ ಹೇಳಿದರು.
ಖಾದರ್ ಅವರು ಕಾರು ಹಿಂಬಾಲಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಾವಲು ವಾಹನ ಸಿಬ್ಬಂದಿ ಅವರ ಕೆಲಸ ಮಾಡಿದ್ದಾರೆ. ಪೊಲೀಸ್ ಇಲಾಖೆ ನಮ್ಮ ಗಮನಕ್ಕೂ ಬರುವ ಮುನ್ನವೇ ಪತ್ತೆ ಹಚ್ಚಿದ್ದಾರೆ. ಆರೋಪಿಯನ್ನ ರೆಡ್ ಹ್ಯಾಂಡ್ ಆಗಿ ಬಂಧಿಸಲು ಮುಂದಾಗಿದ್ದರು. ಆತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಅನ್ನೋದು ಮುಖ್ಯವಲ್ಲ. ಆತನಲ್ಲಿ ದುರುದ್ದೇಶವಿದ್ದರೆ ಪೊಲೀಸ್ರು ಕಠಿಣ ಕ್ರಮಕೈಗೊಳ್ಳುತ್ತಿದ್ದರು. ಪೊಲೀಸ್ರು ಸುಮ್ಮನೆ ಬಿಟ್ಟು ಕಳುಹಿಸುವ ಪ್ರಮೇಯ ಬರುತ್ತಿರಲಿಲ್ಲ ಎಂದು ಶಾಸಕ ಖಾದರ್ ಹೇಳಿದರು. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.