
ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ ಕಟೀಲಿನಲ್ಲಿ ಖ್ಯಾತ ಕೈ ಮತ್ತು ಮೈಕ್ರೋವ್ಯಾಸ್ಕುಲರ್ ತಜ್ಞರಾದ ಡಾ. ಭಾಸ್ಕರಾನಂದ್ ಕುಮಾರ್ ಅವರು ಫೆಬ್ರವರಿ 16ರ ಮಂಗಳವಾರದಂದು ಸಂದರ್ಶನಕ್ಕೆ ಲಭ್ಯರಿರುತ್ತಾರೆ.
ಡಾ. ಭಾಸ್ಕರಾನಂದ್ ಕುಮಾರ್ ಅವರು ಕೆ.ಎಂಸಿ ಆಸ್ಪತ್ರೆ ಮಣಿಪಾಲದಲ್ಲಿ ಎಲುಬು ಮತ್ತು ಕೀಲು ವಿಭಾಗದ ಪ್ರಾಧ್ಯಾಪಕರಾಗಿ ಮತ್ತು ಕೈ ಮತ್ತು ಮೈಕ್ರೋವ್ಯಾಸ್ಕುಲರ್ ವಿಭಾಗದ ಮುಖ್ಯಸ್ಥರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಕಟೀಲಿನಲ್ಲಿ ಫೆಬ್ರವರಿ 16ರಂದು ಬೆಳಗ್ಗೆ 10ರಿಂದ ಅಪರಾಹ್ನ 12.30ರ ವರೆಗೆ ಇವರು ಸಂದರ್ಶನಕ್ಕೆ ಲಭ್ಯರಿರುತ್ತಾರೆ. ಕೈ ಮತ್ತು ಮೊಣಗಂಟಿನ ಸಮಸ್ಯೆಗಳು, ಗಾಯಗೊಂಡ ಕೈಗಳು, ಜನ್ಮಜಾತ ವೈಪರೀತ್ಯಗಳು ಪಾಶ್ರ್ವವಾಯುವಿಗೊಳಪಟ್ಟ ಕೈ ಮುಂತಾದ ಸಮಸ್ಯೆಗಳಿರುವವರು ಇದರ ಪ್ರಯೋಜವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಮತ್ತು ಮುಂಗಡ ನೋಂದಣಿಗಾಗಿ ದೂರವಾಣಿ ಸಂಖ್ಯೆ 6364872121 ಮತ್ತು 0824-2200022ಕ್ಕೆ ಕರೆ ಮಾಡಬಹುದು.