
ಕಾರ್ಕಳ: ಕಾರ್ಕಳದ ಮಿಯಾರು ಕಂಬಳ ಸಮಿತಿ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಇವರ ಸಹಯೋಗದೊಂದಿಗೆ ಇತಿಹಾಸ ಪ್ರಸಿದ್ಧ 17ನೇ ವರ್ಷದ ಲವ ಕುಶ ಜೋಡುಕರೆ ಬಯಲು ಕಂಬಳದ ಮಹೋತ್ಸವಕ್ಕೆ ಕಂಬಳದ ಕರೆಯಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಾಲನೆ ದೊರಕಿತ್ತು.
ಈ ಸಂದರ್ಭದಲ್ಲಿ ಕಂಬಳ ಸಮಿತಿ ಅಧ್ಯಕ್ಷರು ಹಾಗೂ ಉದ್ಘಾಟಕರಾದ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಪ್ರಧಾನ ಅರ್ಚಕರಾದ ಹರಿದಸ್ ಭಟ್, ರೇವರೆಂಡ್ ಫಾದರ್ ಪಾವೂಲ್ ರೆಗೂ, ಸಂಘಟನಾ ಕಾರ್ಯದರ್ಶಿಕೆ. ಗುಣಪಾಲ ಕಡಂಬ, ಜೇವನದಸ್ ಅಡ್ಯಂತಾಯ, ಮಹಾಬಲ ಪೂಜಾರಿ, ರವೀಂದ್ರಕುಮಾರ್ ಮುಂತಾದವರು ಉಪಸ್ಥಿತರಿದ್ದು, ಈ ಸಂದರ್ಭದಲ್ಲಿ ಸುಮಾರು 220 ಜತೆ ಕಂಬಳದ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.