ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ತಡ ಇರುಳಿನ ಬಳಿಕ ಹೋಟೆಲ್ ನಡೆಸುತ್ತಿದ್ದವರನ್ನು ಸರಿಯಾಗಿ ಉತ್ತರಿಸದೆ ಮಹಿಳಾ ಪೋಲೀಸು ಜೊತೆಗೆ ಅನುಚಿತ ವರ್ತನೆ ತೋರಿಸಿದ್ದಕ್ಕಾಗಿ ಬಂಧಿಸಲಾಗಿದೆ. ಮುಖ್ಯ ಆರೋಪಿ ಹೋಟೆಲ್ ಮಾಲಿಕ ಸಂಜೀವ್ ಗೌಡ, ಕ್ಯಾಶಿಯರ್ ಸಂದೀಪ್ ಮತ್ತು ಹೇಮಂತ್ ಬಂಧಿತರು. ತಡ ರಾತ್ರಿ ಹೀಗೆ ಹೋಟೆಲ್ ನಡೆಸುವಂತಿಲ್ಲ ಎಂದುದಕ್ಕೆ 50,000 ಲಂಚ
ಹೈದರಾಬಾದಿನ ಏರ್ಫೋರ್ಸ್ ಅಕಾಡೆಮಿಯಲ್ಲಿ ಪಿಲಾಟಸ್ ಪಿಸಿ 7 ತರಬೇತಿ ವಿಮಾನವು ಪತನಗೊಂಡುದರಿಂದ ಭಾರತೀಯ ವಾಯುಪಡೆಯ ಪೈಲಟ್ಗಳು ಇಬ್ಬರು ಸೋಮವಾರ ಬೆಳಿಗ್ಗೆ ಸಾವಿಗೀಡಾದರು.
ಬಂಗಾಳ ಕೊಲ್ಲಿಯಲ್ಲಿ ಹುಟ್ಟಿದ ಮಿಚುಂಗ್ ಚಂಡಮಾರುತವು ತಮಿಳುನಾಡನ್ನು ಹೊಕ್ಕು 16 ಜಿಲ್ಲೆಗಳಲ್ಲಿ ಭಾರೀ ಗಾಳಿ ಮಳೆಯನ್ನು ಸುರಿಸತೊಡಗಿದೆ. ಕಾಂಚೀಪುರಂ, ಚೆಂಗಲ್ ಪಟ್ಟು ಮೊದಲಾದ ಜಿಲ್ಲಾಡಳಿತಗಳು ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ನೀಡಿದೆ. ಮಳೆಯಿಂದಾಗಿ ಜನಜೀವನವು ಅಸ್ತವ್ಯಸ್ತಗೊಂಡಿದೆ. ಚೆನ್ನೈ ಸಹಿತ, ತಿರುವಳ್ಳೂರು ಕರ್ನಾಟಕದೊತ್ತಿನ ಧರ್ಮಪುರಿಯವರೆಗೆ 16 ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ
ಸರಕಾರಿ ನೌಕರರೊಬ್ಬರಿಂದ 20 ಲಕ್ಷ ರೂಪಾಯಿ ಲಂಚ ಪಡೆಯುತಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿ ಅಂಕಿತ್ ತಿವಾರಿ ಅವರನ್ನು ತಮಿಳುನಾಡು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳದವರು ಡಿಂಡಿಗಲ್ನಲ್ಲಿ ವಶಕ್ಕೆ ಪಡೆದರು. ಸ್ಥಳೀಯ ಕೋರ್ಟು ತಿವಾರಿಯನ್ನು ಡಿಸೆಂಬರ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದರ ಬೆನ್ನಿಗೇ ಮಧುರೈಯಲ್ಲಿರುವ ಇಡಿ- ಜಾರಿ ನಿರ್ದೇಶನಾಲಯದ ಪ್ರಾದೇಶಿಕ ಕಚೇರಿಗೆ ಭ್ರಷ್ಟಾಚಾರ ನಿಗ್ರಹ ದಳದವರು ಜಾರಿ ಮಾಡಿದರು. ಹಾಗೆಯೇ
ಆಂಧ್ರ ಮತ್ತು ತೆಲಂಗಾಣದ ನಡುವೆ 66% ಮತ್ತು 34% ನಾಗಾರ್ಜುನ ಸಾಗರ ನೀರಿನ ಹಂಚಿಕೆ ಒಪ್ಪಂದ ಆಗಿದೆ. ಕರ್ನಾಟಕವು ತಮಿಳುನಾಡಿಗೆ ಕಾವೇರಿ ನೀರು ಬಿಡುವ ಮಾದರಿಯ ಗಲಾಟೆ ಆಂಧ್ರ ಮತ್ತು ತೆಲಂಗಾಣದ ನಡುವೆ ನಡೆದಿದೆ. ಕೃಷ್ಣ ನದಿಗೆ ಕಟ್ಟಿರುವ ನಾಗಾರ್ಜುನ ಸಾಗರವು ಆಂಧ್ರವು ವಿಭಜನೆಗೊಂಡ ಬಳಿಕವೂ ಭಾರೀ ವಿವಾದಕ್ಕೆ ಏನೂ ಕಾರಣವಾಗಿಲ್ಲ. ಆದರೆ ತೆಲಂಗಾಣದಲ್ಲಿ ಮತದಾನ ನಡೆಯುವ ದಿನ ಆಂಧ್ರದ 700 ಪೋಲೀಸರು ನುಗ್ಗಿ ಬಂದು ನಾಗಾರ್ಜುನ ಸಾಗರ ಅಣೆಕಟ್ಟಿನಿಂದ ನೀರು
ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಗ್ರಾಮಸ್ಥರು ದೂರು ನೀಡಿರುವ ಹಿನ್ನೆಲೆಯಲ್ಲಿ ಆಯುರ್ವೇದ ವೈದ್ಯ 47ರ ಡಾ. ಸತೀಶ್ ತಾಕೊಲೆ ಮಾಡಿಕೊಂಡಿದ್ದಾರೆ. ಅವರ ಮೃತ ಶರೀರವು ಕುಶಾಲನಗರ ತಾಲೂಕಿನ ಆನೆಕಾಡು ಬಳಿ ಹೆದ್ದಾರಿಯಲ್ಲಿ ಕಾರಿನಲ್ಲಿ ಪತ್ತೆಯಾಗಿದೆ.ಮಂಡ್ಯದ ಶಿವಳ್ಳಿಯಲ್ಲಿ ಇವರು ವೆಂಕಟೇಶ್ವರ ಕ್ಲಿನಿಕ್ ನಡೆಸುತ್ತಿದ್ದರು. ಅಲ್ಲಿ ಅಕ್ರಮ ಭ್ರೂಣ ಹತ್ಯೆ ಮತ್ತಿತರ ಅಕ್ರಮಗಳಲ್ಲಿ ತೊಡಗಿದ್ದರು ಎಂದು ಊರವರು ಸರಕಾರಕ್ಕೆ ಮತ್ತು ಆರೋಗ್ಯ ಸಚಿವರಿಗೆ ದೂರು
ಹಾಸನದಲ್ಲಿ ನಿನ್ನೆ ಕಾಸಗಿ ಶಾಲೆಯ ಶಿಕ್ಷಕಿಯನ್ನು ಅಪಹರಿಸಿದ್ದ ತಂಡವನ್ನು ಬೆನ್ನಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯಲ್ಲಿ ಅಡ್ಡ ಹಾಕಿದ ಪೋಲೀಸರು ಶಿಕ್ಷಕಿ ಅರ್ಪಿತಳನ್ನು ಗಂಡಾಂತರದಿಂದ ಪಾರು ಮಾಡಿದರು. ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಅರ್ಪಿತ ಟೀಚರಾಗಿ ದುಡಿಯುತ್ತಿದ್ದಳು. ಸಂಬಂಧಿಕರಾದ ರಾಮು ಮನೆಯವರು ಹದಿನೈದು ದಿನಗಳ ಹಿಂದೆ ಮದುವೆ ಪ್ರಸ್ರಾಪ ಮುಂದಿಟ್ಟಿದ್ದರು. ಆದರೆ ಅರ್ಪಿತ ಒಪ್ಪಿರಲಿಲ್ಲ. ಆದ್ದರಿಂದ ರಾಮು ಮತ್ತು ತಂಡದವರು ಆಕೆಯನ್ನು ಶಾಲೆಯ
ಈ ಮಳೆಗಾಲ ಸರಿಯಾಗಿರದೆ ಕರ್ನಾಟಕದ 223 ತಾಲೂಕುಗಳು ಬರಪೀಡಿತ. ಸೋಮಾರಿ ಕೇಂದ್ರ ಸರಕಾರ ಪರಿಹಾರ ಪರಿಗಣನೆಗೆ ತೆಗೆದುಕೊಂಡಿಲ್ಲ. ಸದ್ಯ ಬಾಧಿತ ರೈತರಿಗೆ ರೂಪಾಯಿ 2,000ದಷ್ಟಾದರೂ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮನೆಕಚೇರಿ ಕೃಷ್ಣದಲ್ಲಿ ಅವರು ಮಂತ್ರಿ ಮತ್ತು ಅಧಿಕಾರಿಗಳ ಸಭೆ ನಡೆಸಿ ಈ ಸೂಚನೆ ನೀಡಿದರು. ಕೇಂದ್ರ ಸರಕಾರವು ತನ್ನ ಕಿಸೆಯಿಂದ ಪರಿಹಾರ ನೀಡುವುದಿಲ್ಲ. ರಾಜ್ಯದ ತೆರಿಗೆ ಪಾಲು ನೀಡದೆ ಬಾಕಿ
2023ರಲ್ಲಿ ಜಗತ್ತಿನ ತಾಪಮಾನವು ಜಾಗತಿಕ ದಾಖಲೆ ಬರೆದಿದೆ. ಅತಿರೇಕದ ಹವಾಮಾನದ ವೈಪರೀತ್ಯಗಳು ಲೋಕವನ್ನು ವಿನಾಶ ಮತ್ತು ಹತಾಶೆಗೆ ದೂಡಿದೆ ಎಂದು ವಿಶ್ವ ಸಂಸ್ಥೆಯ ಹವಾಮಾನ ವಿಭಾಗದ ಮುಖ್ಯಸ್ಥ ಪ್ಯಾಟೆರಿ ಟಾಲನ್ ಹೇಳಿದರು. 2023ರಲ್ಲಿ ಪ್ರಪಂಚದ ಬಿಸಿ ಮಟ್ಟವು ಹಿಂದಿನೆಲ್ಲ ದಾಖಲೆಗಳನ್ನು ಮುರಿದಿದೆ. ಹಸಿರು ಮನೆ ಅನಿಲದ ಪ್ರಮಾಣ ಅತಿಯಾಗಿದೆ. ಅಂಟಾರ್ಕ್ಟಿಕ್ನಲ್ಲಿ ಹೊಸದಾಗಿ ಬೀಳುವ ಮಂಜು ಪ್ರಮಾಣ ತೀರಾ ಕಡಿಮೆ ಆಗಿದೆ. ಕಳೆದ 9 ವರುಷಗಳಿಂದ ಬಿಸಿ ಮಟ್ಟ ಏರುತ್ತ
ಬೆಂಗಳೂರಿನ ದೊಮ್ಮಲೂರಿನ ಜೀವನಭೀಮನಗರಕ್ಕೆ ಹೋಗುಬ ಬಸ್ಸು ನೋಡಿರುತ್ತೀರಿ. ಹೆಸರು ಹಲಗೆ, ಬಾಯಿ ಮಾತಲ್ಲೂ ಜೀವನಭೀಮನಗರ ಕೇಳಿರುತ್ತೀರಿ. ಆದರೆ ಇದು ಜೀವನಬಿಮಾ ನಗರ. ನಾವು ವಿಮೆ ಎನ್ನುವುದೇ ಬಡಗಣ ಭಾರತದ ಬಿಮಾ. ಪೀಣ್ಯದಲ್ಲಿ ಎಂಟನೆಯ ಮೈಲಿ ಇದೆ. ಬಿಎಂಟಿಸಿ ಕನ್ನಡದಲ್ಲಿ ಮೈಲಿ ಎಂದು ಸರಿ ತೋರಿಸಿದರೂ ಇಂಗ್ಲಿಷಿನಲ್ಲಿ mile ಬದಲು ಮೇಲ್ (mail) ಎಂದು ತಪ್ಪು ತೋರಿಸುತ್ತದೆ.ಬೆಂಗಳೂರಿನ ಸಾಲು ಐಯ್ಯಂಗಾರ್ ತಪ್ಪು ಫಲಕಗಳಿಗೆ ಜೊತೆಯಾಗಿ ಕೆಲವು ಐಯ್ಯರ್ ಮೆಸ್